ಚಾಮರಾಜ ಸವಡಿ
ಹುಟ್ಟಿದ್ದು ಬೆಳೆದಿದ್ದು ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ. ಸದ್ಯ ಬೆಂಗಳೂರಿನಲ್ಲಿ ವಾಸ. ವೃತ್ತಿಯಿಂದ ಪತ್ರಕರ್ತ. ಓದಿದ್ದಕ್ಕೂ ಮಾಡುತ್ತಿರುವ ಕೆಲಸಗಳಿಗೂ ಸಂಬಂಧವಿಲ್ಲ. ಹಾಯ್ ಬೆಂಗಳೂರ್, ವಿಜಯ ಕರ್ನಾಟಕ, ಈ ಟಿವಿ ಕನ್ನಡ, ಪ್ರಜಾವಾಣಿ, ಸುವರ್ಣ ನ್ಯೂಸ್, ಸಮಯ ನ್ಯೂಸ್ನಲ್ಲಿ ಕೆಲಸ ಮಾಡಿದ ಅನುಭವ. ಜೊತೆಗೆ ಓದು, ಬರಹ, ಅನುವಾದದಲ್ಲಿ ತಲ್ಲೀನ. ನಿರಂತರವಾಗಿ ಅಲೆಯುವ ಮನಸು. ಮುಕ್ತ ಅವಕಾಶ ದೊರಕಿದರೆ, ನೆಲೆ ನಿಂತು ಸೊಗಸಾಗಿ ಕೆಲಸ ಮಾಡಬೇಕೆಂಬ ಕನಸು.